ಪೆರ್ಲ ಕಷ್ಣ ಭಟ್ ಪ್ರಶಸ್ತಿ ಸ್ಥಾಪನೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಒಕ್ಟೋಬರ್ 16 , 2013
|
ಒಕ್ಟೋಬರ್ 16 , 2013
|
ಪೆರ್ಲ ಕಷ್ಣ ಭಟ್ ಪ್ರಶಸ್ತಿ ಸ್ಥಾಪನೆ
ಉಡುಪಿ :
ವಿದ್ವಾಂಸ, ಲೇಖಕ ದಿ. ಪೆರ್ಲಕೃಷ್ಣ ಭಟ್ ಹೆಸರಲ್ಲಿ ಪ್ರಶಸ್ತಿ ಸ್ಥಾಪಿಸಲಾಗಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಧರ್ಮದರ್ಶಿ ಕಷ್ಣಪ್ರಸಾದ ಅಡ್ಯಂತಾಯ ತಮ್ಮ ವಿದ್ಯಾ ಗುರುವಿನ ಸ್ಮರಣಾರ್ಥ ಸ್ಥಾಪಿಸಿದ ಈ ಪ್ರಶಸ್ತಿಯನ್ನು ಉಡುಪಿಯ ಯಕ್ಷಗಾನ ಕಲಾರಂಗದ ಮೂಲಕ ನೀಡಲಾಗುವುದು.
10,000 ರೂ. ನಗದನ್ನು ಪ್ರಶಸ್ತಿ ಒಳಗೊಂಡಿದ್ದು ತಾಳಮದ್ದಲೆ ಕ್ಷೇತ್ರದ ಹಿರಿಯ ಸಾಧಕರನ್ನು ಗೌರವಿಸಲಾಗುವುದು. ಸಂಸ್ಥೆ ಎಂಟು ವರ್ಷಗಳ ಹಿಂದೆ ತಾಳಮದ್ದಲೆ ಅರ್ಥಧಾರಿಗೆ ನೀಡಲೆಂದೇ ಮಟ್ಟಿ ಮುರಳೀಧರ ರಾವ್ ಪ್ರಶಸ್ತಿ ಸ್ಥಾಪಿಸಿದಾಗ ಪೆರ್ಲಕಷ್ಣಭಟ್ ಮೊದಲ ಪ್ರಶಸ್ತಿ ಪಡೆದಿದ್ದರು. ಯಕ್ಷಗಾನ ಕಲಾರಂಗ ಕಲಾವಿದರಿಗೆ ನೀಡುವ 10,000 ರೂ. ನಗದು ಪುರಸ್ಕಾರದ ಸಂಖ್ಯೆ 15 ಕ್ಕೇರಿದೆ ಎಂದು ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
ಕೃಪೆ : http://vijaykarnataka.indiatimes.com/
|
|
|